ವಿಪರ್ಯಾಸಗಳು

ಅಲ್ಲಿ ವಿದ್ವತ್ತಿನದೇ ಮೇಲುಗೈ
ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ
ಅಸಲಿಗೆ ದ್ವೈತ ಅದ್ವೈತಗಳೇ
ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು
ಹೊಸತು ಹುಡುಕುವ ಪರಿ
ಪರಿಪರಿಯಾಗಿ

ಇನ್ನೊಂದೆಡೆ ಕಾಂಚಾಣದ
ಕುಣಿತ
ಸತ್ಯಕ್ಕೂ ಸ್ಥಳವಿಲ್ಲ
ಜ್ಞಾನಕ್ಕೂ ಬೆಲೆಯಿಲ್ಲ
ಸತ್ಯ ಜ್ಞಾನಗಳೆರಡು
ಕಾಂಚಾಣದ ಮಾರುಕಟ್ಟೆಯಲ್ಲಿ
ಇಡಲ್ಪಟ್ಟಿವೆ ಗಿರವಿಗೆ

ಅಲ್ಲೊಂದು ಸೌಂದರ್ಯ ರಾಶಿ
ನೈಜತೆಯೋ, ಕೃತಕತೆಯೋ,
ಅರಿಯದಂತಿರೆ ಅಲಂಕಾರ
ನಟನೆಯೇ ನಿಜವೆಂಬ
ಭ್ರಮೆಯ ಬದುಕು

ಮತ್ತಲ್ಲಿ ಮಠಗಳು ಆಶ್ರಮಗಳು
ಸಭ್ಯಸ್ಥರ ಕೂಟ
ಖಾವಿಬಟ್ಟೆಗಳ ಮೇಲಾಟ

ವಿದ್ಯೆ ಬುದ್ಧಿಗಳ ಆಗರ
ಸಹನೆ ಸಂಯಮಗಳ ಸಾಗರ
ಆದರೂ ಖಾವಿ ಬಟ್ಟೆಯಲ್ಲೂ ಕಾಮಿ
ಅಲ್ಲಿಯೂ ಅಂಟಿದ ರಕ್ತದ ಕಲೆ
ಅನ್ಯಾಯ ಅನಾಚಾರ ವ್ಯಭಿಚಾರಗಳ ಬಲೆ

ಮತ್ತೊಂದು ಕಾಲ ಕಾಯುತ್ತಿದೆ
ವಿಧ್ವಂಸಕರೆ ವಿಧ್ವಾಂಸರಾಗುವರು
ಜಾರೆಯೆಂದರೆ ಗರತಿ
ಸನ್ಯಾಸಿಯೆಂದರೆ ಸಂಸಾರಿ
ಚಾಂಡಾಲನೆ ಗುರುವಾಗುವನು
ಅರ್ಥವಾಗದ
ಮತ್ತೆ ಅರ್ಥೈಸಲಾಗದ
ಆದರೂ ಜಾಣ ಕುರುಡು ನಾಟಕಗಳು
ಎಂಥೆಂಥದೋ ವಿಪರ್ಯಾಸಗಳು


Previous post ನಾ…. ಬರುತ್ತೇನೆ ಕೇಳು!
Next post ಕವಿಯ ಹುಚ್ಚು ಮನಸ್ಸು

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys